ಈ blog ನ ಸುಮಾರು ಒಂದು ವರ್ಷದ ಹಿಂದೆ create ಮಾಡಿದ್ಧೆ, ಆದರೆ, ಇದರ ಮೂಲಕ ಹಂಚಿಕೊಳ್ಳಬೇಕು ಎಂದಿದ್ಧ ನೂರಾರು ಮನದಂಗಳದ ಮಾತುಗಳು, ಹಲವಾರು ಕಾರಣಗಳಿಂದ ಮನದಲ್ಲಿಯೇ ಉಳಿದುಬಿಟ್ಟಿದೆ. ಇತ್ತೀಚೆಗೆ ನನ್ನ ಸ್ನೇಹಿತನೊಬ್ಬನ Blog ಅನ್ನು ಓದಿ ಪುನಃ blogging ಮಾಡಲು ಪ್ರೇರೇಪಿತನಾಗಿದ್ದೇನೆ :) ಈ ತರಹದ ಪ್ರೇರೇಪಣೆ ಬಹಳಷ್ಟು ಬಾರಿ ಆಗಿದೆ, ಆದರೆ ಅದು ಕೇವಲ 2 -3 ದಿನಗಳಿಗೆ ಮಾತ್ರ ಸೀಮಿತವಾಗಿತ್ತು :) ಈ ಬಾರಿಯಿಂದನಾದರೂ ನಿರಂತರವಾಗಿ ಮನದಂಗಳದ ಮಾತುಗಳು ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ :) ಹೊಸ ಯುಗದ ಆದಿಯಂದೆ ನನ್ನ ಹೊಸ blog ನ ಆದಿ :)
PS : ಭಯ ಪಡಬೇಡಿ ಇಷ್ಟು ಸ್ಪಷ್ಟ ಕನ್ನಡದಲ್ಲಿ ಬರೆಯುವುದಿಲ್ಲ, ಬೆಂಗಳೂರಿಗರ ಆಡುಭಾಷೆಯಲ್ಲೇ ಬರೆಯುವೆ :)
ಹೊಸ ವಸಂತ,
ಹೊಸ ದಿನ ,
ಹೊಸ ಚಿಗುರು,
ಹೊಸ ಇಂಚರ
ಇವೆಲ್ಲವ ಮೂಲಕ ಪ್ರಕೃತಿಯು ಹೊಸ ಸಂವತ್ಸರವ ಆಹ್ವಾನಿಸಿದೆ :)
ಹೊಸ ಕನಸು,
ಹೊಸ ದಾರಿ,
ಹೊಸ ಜೀವನ
ಇವೆಲ್ಲವ ಮೂಲಕ ನಾವು ಹೊಸ ಸಂವತ್ಸರವ ಆಹ್ವಾನಿಸೋಣ :)
'ಬೇವಿನ' ನೆನಪುಗಳು ಮರೆಯಾಗಲಿ
'ಬೆಲ್ಲದ' ನೆನಪುಗಳು ಚಿರವಾಗಲಿ
ವಿಕೃತಿ ನಾಮ ಸಂವತ್ಸರದಲ್ಲಿ ನಿಮ್ಮ ಎಲ್ಲಾ ಕನಸುಗಳು ನನಸಾಗಲಿ :)
ಯುಗಾದಿಯ ಹಾರ್ಧಿಕ ಶುಭಾಶಯಗಳು :)
ಬ್ಲಾಗ್ ಶುರುನಲ್ಲೇ ಒಳ್ಳೆಯ ಕವಿತೆ ಹಾಕಿದ್ದೀಯ, ದಿನ ಕೂಡ ಶುಭವಾದದ್ದು, ಬ್ಲಾಗ್ ತುಂಬಾ ಚೆನ್ನಾಗಿದೆ. ಹೀಗೆ ಮುಂದುವರೀಲಿ.
ReplyDelete